Hanuman Chalisa Kannada Meaning – ಅರ್ಥಪೂರ್ಣ ಹನುಮಾನ್ ಚಾಲೀಸ ಕನ್ನಡ

Hanuman Chalisa Kannada Meaning PDF : ಕನ್ನಡದಲ್ಲಿ ಹನುಮಾನ್ ಚಾಲೀಸಾದ ಸಂಪೂರ್ಣ ಅರ್ಥ ಮತ್ತು ವಿವರಣೆ ಇಲ್ಲಿ ನೀಡಲಾಗಿದೆ. ಭಕ್ತಿಯಿಂದ ಹನುಮಾನ್ ಚಾಲೀಸೆಯನ್ನು ಜಪಿಸಿದರೆ ಭಯ, ರೋಗ ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ. ಈ ಪುಟದಲ್ಲಿ ನೀವು ಕನ್ನಡ ಭಾಷೆಯಲ್ಲಿ ಹನುಮಾನ್ ಚಾಲೀಸೆಯ ಎಲ್ಲಾ ಶ್ಲೋಕಗಳು, ಅವುಗಳ ಸರಳ ಅರ್ಥ ಮತ್ತು ಉಚಿತ PDF ಡೌನ್ಲೋಡ್ ವಿಧಾನವನ್ನು ಕಾಣಬಹುದು. ಹನುಮಾನ್ ಭಕ್ತರಿಗೆ ಇದೊಂದು ಶಕ್ತಿಶಾಲಿ ಪ್ರಾರ್ಥನೆ!

ಶ್ರೀ ಗುರು ಚರಣ ಸರೋಜ ರಜ
ನಿಜಮನ ಮುಕುರ ಸುಧಾರಿ
ವರಣೌ ರಘುವರ ವಿಮಲ ಯಶ
ಜೋ ದಾಯಕ ಫಲಚಾರಿ ।।

ಅರ್ಥ : ಶ್ರೀ ಗುರುವಿನ ಪಾದಕಮಲಗಳ ಧೂಳಿನಿಂದ ‌ನನ್ನ ಮನಸ್ಸೆಂಬ ಕನ್ನಡಿಯನ್ನು ಬೆಳಗಿ, ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮನ ವಿಮಲ ಚರಿತ್ರೆಯನ್ನು ವರ್ಣಿಸುವೆನು

ಬುದ್ಧಿಹೀನ ತನು ಜಾನಿಕೇ
ಸುಮಿರೌ ಪವನಕುಮಾರ
ಬಲ ಬುದ್ಧಿ ವಿದ್ಯಾ ದೇಹು ಮೋಹಿ
ಹರಹು ಕಲೇಶ ವಿಕಾರ ।।

ಅರ್ಥ : ಪವನಕುಮಾರನೇ ನನ್ನನ್ನು ಬುದ್ಧಿಹೀನನೆಂದು ತಿಳಿದು ನನಗೆ ಬಲ ಬುದ್ಧಿ ವಿದ್ಯೆಗಳನ್ನು ನೀಡಿ ನನ್ನಲ್ಲಿರುವ ದೋಷಗಳನ್ನು ಕಷ್ಟಗಳನ್ನು ಪರಿಹರಿಸು

ಜಯ ಹನುಮಾನ ಜ್ಞಾನಗುಣಸಾಗರ ।
ಜಯ ಕಪೀಶ ತಿಹು ಲೋಕ ಉಜಾಗರ ।। ೧ ।।

ಅರ್ಥ : ಜ್ಞಾನ ಗುಣಸಾಗರನಾದ ಹನುಮಂತನೇ ನಿನಗೆ ಜಯವಾಗಲಿ, ಮೂರು ಲೋಕಗಳನ್ನು ಜ್ಞಾನದಿಂದ ಬೆಳಗುವ ನಿನಗೆ ಜಯವಾಗಲಿ

ರಾಮದೂತ ಅತುಲಿತ ಬಲಧಾಮಾ ।
ಅಂಜನಿಪುತ್ರ ಪವನಸುತ ನಾಮಾ ।। ೨ ।।

ಅರ್ಥ : ರಾಮದೂತನೇ‌ ಅಪರಿಮಿತ ಬಲವುಳ್ಳವನೇ ಅಂಜನಿದೇವಿಯ ಪುತ್ರನೇ ಪವನಸುತನೇ

ಮಹಾವೀರ ವಿಕ್ರಮ ಬಜರಂಗೀ ।
ಕುಮತಿ ನಿವಾರ ಸುಮತಿ ಕೇ ಸಂಗೀ ।। ೩ ।।

ಅರ್ಥ : ಮಹಾವೀರನೇ, ವಿಕ್ರಮನೇ ವಜ್ರಾಂಗನೇ, ನೀನು ದುರ್ಬುದ್ಧಿಯನ್ನು ಹೋಗಲಾಡಿಸಿ ಸುಬುದ್ಧಿಯನ್ನು ಕೊಡುವವನು

ಕಂಚನ ವರಣ ವಿರಾಜ ಸುವೇಶಾ ।
ಕಾನನ ಕುಂಡಲ ಕುಂಚಿತ ಕೇಶಾ ।। ೪ ।।

ಅರ್ಥ : ನೀನು ಚಿನ್ನದಂತಹ ಮೈಬಣ್ಣವುಳ್ಳವನು, ನಿನ್ನ ಕಿವಿಯಲ್ಲಿ ಕುಂಡಲಗಳು, ನಿನ್ನದು ಗುಂಗುರು ಕೂದಲು, ಉತ್ತಮ ವೇಷ ಧರಿಸಿ ಶೋಭಿಸುತ್ತಿರುವೆ

ಹಾಥ ವಜ್ರ ಔರು ಧ್ವಜಾ ವಿರಾಜೈ ।
ಕಾಂಧೇ ಮೂಂಜ ಜನೇವೂ ಸಾಜೈ ।। ೫ ।।

ಅರ್ಥ : ನಿನ್ನ ಕೈಯಲ್ಲಿ ವಜ್ರಾಯುಧ ಮತ್ತು ಧ್ವಜವು ರಾರಾಜಿಸುತ್ತಿದೆ. ಹೆಗಲಿಂದ ಕೆಳಗೆ ಮೂಂಜಿ ಹಾಗೂ ಜನಿವಾರಗಳಿವೆ

ಶಂಕರ ಸುವನ ಕೇಸರೀನಂದನ ।
ತೇಜ ಪ್ರತಾಪ ಮಹಾ ಜಗವಂದನ ।। ೬ ।।

ಅರ್ಥ : ನೀನು ರುದ್ರಾಂಶ ಸಂಭೂತ ಹಾಗೂ ವಾನರರಸ ಕೇಸರಿಯ ಮಗನು, ತೇಜೋವಂತನಾಗಿ ಪ್ರತಾಪಿಯಾಗಿ ಇಡೀ ಜಗತ್ತಿನಿಂದ ವಂದ್ಯನು

ವಿದ್ಯಾವಾನ ಗುಣೀ ಅತಿಚಾತುರ ।
ರಾಮ ಕಾಜ ಕರಿವೇ ಕೋ ಆತುರ ।। ೭ ।।

ಅರ್ಥ : ನೀನು ಗುಣವಂತನು, ವಿದ್ಯಾವಂತನು ಅತ್ಯಂತ ಚತುರನು, ರಾಮ ಕಾರ್ಯವನ್ನು ಮಾಡಿ ಮುಗಿಸಲು ಸದಾ ಆತುರ ಪಡುವವನು

ಪ್ರಭು ಚರಿತ್ರ ಸುನಿವೇ ಕೋ ರಸಿಯಾ ।
ರಾಮ ಲಖನ ಸೀತಾ ಮನ ಬಸಿಯಾ ।। ೮ ।।

ಅರ್ಥ : ಶ್ರೀರಾಮಚಂದ್ರನ ಚರಿತೆಯನ್ನು ಆಲಿಸುವುದರಲ್ಲಿ ನಿನಗೆ ಆನಂದ. ಶ್ರೀರಾಮ, ಲಕ್ಷ್ಮಣ, ಸೀತೆ ನಿನ್ನ ಮನಸ್ಸಿನಲ್ಲಿ ನೆಲಸಿ ಬಿಟ್ಟಿದ್ದಾರೆ

ಸೂಕ್ಷ್ಮರೂಪ ಧರಿ ಸಿಯಹಿ ದಿಖಾವಾ ।
ವಿಕಟರೂಪ ಧರಿ ಲಂಕ ಜರಾವಾ ।। ೯ ।।

ಅರ್ಥ : ನೀನು ಸೂಕ್ಷ್ಮ ರೂಪ ಧರಿಸಿಕೊಂಡು ಸೀತೆಗೆ ಕಾಣಿಸಿಕೊಂಡೆ ಅದೇ ಭಯಂಕರ ರೂಪವನ್ನು ಧಾರಣ ಮಾಡಿಕೊಂಡು ಲಂಕೆಯನ್ನು ಸುಟ್ಟೆ

ಭೀಮರೂಪ ಧರಿ ಅಸುರ ಸಂಹಾರೇ ।
ರಾಮಚಂದ್ರ ಕೇ ಕಾಜ ಸಂವಾರೇ ।। ೧೦ ।।

Hanuman Chalisa Kannada Meaning PDF

ಅರ್ಥ : ನೀನು ಬೃಹದಾಕಾರ ಧರಿಸಿ ಅಸುರರನ್ನು ಸಂಹರಿಸಿದೆ, ಶ್ರೀರಾಮ ಚಂದ್ರನ ಕಾರ್ಯವನ್ನು ಸಾಂಗಗೊಳಿಸಿದೆ

ಲಾಯ ಸಂಜೀವನ ಲಖನ ಜಿಯಾಯೇ ।
ಶ್ರೀರಘುವೀರ ಹರಷಿ ವುರ ಲಾಯೇ ।। ೧೧ ।।

ಅರ್ಥ : ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಬದುಕಿಸಿಕೊಂಡೆ. ಶ್ರೀ ರಘುನಾಥನು ಸಂತಸದಿಂದ‌ ನಿನ್ನನ್ನು ಆಲಂಗಿಸಿಕೊಂಡನು

ರಘುಪತಿ ಕೀನ್ಹೀ ಬಹುತ ಬಡಾಯೀ ।
ತುಮ ಮಮ ಪ್ರಿಯ ಭರತ ಸಮ ಭಾಯೀ ।। ೧೨ ।।

ಅರ್ಥ : ನೀನು ನನ್ನ ಸೋದರ ಭರತನಷ್ಟೇ ನನಗೆ ಪ್ರಿಯನು ಎಂದು ಶ್ರೀ ರಾಮಚಂದ್ರನು ನಿನ್ನನ್ನು ಬಹುವಾಗಿ ಹೊಗಳಿದ್ದಾನೆ

ಸಹಸ ವದನ ತುಮ್ಹರೋ ಯಶ ಗಾವೈ ।
ಅಸ ಕಹಿ ಶ್ರೀಪತಿ ಕಂಠ ಲಗಾವೈ ।। ೧೩ ।।

ಅರ್ಥ : ಆದಿಶೇಷನು ಸಹಸ್ರ ಮುಖಗಳಿಂದ ನಿನ್ನ ಕೀರ್ತಿಯನ್ನು ಹಾಡಿ ಹೊಗಳುತ್ತಾನೆ ಎನ್ನುತ್ತಾ ಶ್ರೀಪತಿಯ ನಿನ್ನನ್ನು ಆಲಂಗಿಸಿಕೊಳ್ಳುತ್ತಾನೆ

ಸನಕಾದಿಕ ಬ್ರಹ್ಮಾದಿ ಮುನೀಶಾ ।
ನಾರದ ಶಾರದ ಸಹಿತ ಅಹೀಶಾ ।। ೧೪ ।।

ಅರ್ಥ : ಸನಕಾದಿ ಋಷಿವರ್ಯರು, ಬ್ರಹ್ಮಾದಿಗಳು, ನಾರದರು, ಸರಸ್ವತಿಯೂ ಆದಿಶೇಷನು

ಯಮ ಕುಬೇರ ದಿಗಪಾಲ ಜಹಾಂ ತೇ ।
ಕವಿ ಕೋವಿದ ಕಹಿ ಸಕೇ ಕಹಾಂ ತೇ ।। ೧೫ ।।

ಅರ್ಥ : ಯಮನು ಕುಬೇರನು ದಿಕ್ಪಾಲರು ಕವಿಕೋವಿದರು ನಿನ್ನ ಮಹಿಮೆಯನ್ನು ಎಷ್ಟೆಂದು ವರ್ಣಸಿಯರು

ತುಮ ಉಪಕಾರ ಸುಗ್ರೀವಹಿ ಕೀನ್ಹಾ ।
ರಾಮ ಮಿಲಾಯ ರಾಜ ಪದ ದೀನ್ಹಾ ।। ೧೬ ।।

ಅರ್ಥ : ನೀನು ಸುಗ್ರೀವನಿಗೆ ಉಪಕಾರವನ್ನು ಮಾಡಿದೆ. ರಾಮನ ಸಖ್ಯ ಮಾಡಿಸಿ ಅವನಿಗೆ ರಾಜ್ಯ ಪದವಿ ಸಿಗುವಂತೆ ಮಾಡಿದೆ

ತುಮ್ಹರೋ ಮಂತ್ರ ವಿಭೀಷಣ ಮಾನಾ ।
ಲಂಕೇಶ್ವರ ಭಯ ಸಬ ಜಗ ಜಾನಾ ।। ೧೭ ।।

ಅರ್ಥ : ನೀನು ಕೊಟ್ಟ ಸಲಹೆಯನ್ನು ವಿಭೀಷಣನು ಪಾಲಿಸಿದನು. ಆದರಿಂದಲೇ ಅವನು ಲಂಕಾಧಿಪತಿಯಾದನೆಂಬುದನ್ನು ಇಡೀ ಜಗತ್ತೇ ಬಲ್ಲದು

ಯುಗ ಸಹಸ್ರ ಯೋಜನ ಪರ ಭಾನೂ ।
ಲೀಲ್ಯೋ ತಾಹಿ ಮಧುರ ಫಲ ಜಾನೂ ।। ೧೮ ।।

ಅರ್ಥ : ಎರಡು ಸಹಸ್ರ‌ ಯೋಜನ ದೂರವಿದ್ದ ಸೂರ್ಯವನ್ನು ಮಧುರ ಫಲವೆಂದು ತಿಳಿದು ಅವನೆಡೆಗೆ ಹಾರಿದೆ

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ।
ಜಲಧಿ ಲಾಂಘಿ ಗಯೇ ಅಚರಜ ನಾಹೀ ।। ೧೯ ।।

ಅರ್ಥ : ಶ್ರೀರಾಮಚಂದ್ರನಿತ್ತ ಮುದ್ರಿಕೆಯನ್ನು ಬಾಯಲ್ಲಿಟ್ಟು ನೀನು ಸಮುದ್ರದ ಮೇಲೆ ಹಾರುತ್ತಾ ಅದನ್ನು ದಾಟಿದೆ ಅಂದರೆ ಇದರಲ್ಲಿ ಏನೂ ಅಶ್ಚರ್ಯವಿಲ್ಲ

ದುರ್ಗಮ ಕಾಜ ಜಗತ ಕೇ ಜೇತೇ ।
ಸುಗಮ ಅನುಗ್ರಹ ತುಮ್ಹರೇ ತೇತೇ ।। ೨೦ ।।

Hanuman Chalisa Meaning In Kannada

ಅರ್ಥ : ಪ್ರಪಂಚದಲ್ಲಿ ದುರ್ಗಮ ಎನಿಸುವ ಎಷ್ಟೆಲ್ಲಾ ಕಾರ್ಯಗಳು ಇವೆಯೋ ಅವೆಲ್ಲ ನಿನ್ನ ಅನುಗ್ರಹವಾದ ಕಾರಣ ಸುಲಭವೆನಿಸುತ್ತವೆ

ರಾಮ ದುವಾರೇ ತುಮ ರಖವಾರೇ ।
ಹೋತ ನ ಆಜ್ಞಾ ಬಿನು ಪೈಸಾರೇ ।। ೨೧ ।।

ಅರ್ಥ : ನೀನು ರಾಮನ ಮನೆಯ ಬಾಗಿಲನ್ನು ಕಾಯುವವನು ನಿನ್ನ ಅನುಮತಿಯಿಲ್ಲದೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ

ಸಬ ಸುಖ ಲಹೈ ತುಮ್ಹಾರೀ ಶರಣಾ ।
ತುಮ ರಕ್ಷಕ ಕಾಹೂ ಕೋ ಡರನಾ ।। ೨೨ ।।

ಅರ್ಥ : ನಿನ್ನಲ್ಲಿ ಶರಣು ಬಂದವರಿಗೆ ಸಕಲ ಸುಖಗಳು ಲಭಿಸುತ್ತವೆ. ನೀನೇ ರಕ್ಷಕನಾದರೆ ಯಾರಿಗೂ ಭಯ ಪಡಬೇಕಾದುದಿಲ್ಲ

ಆಪನ ತೇಜ ಸಂಹಾರೋ ಆಪೈ ।
ತೀನೋಂ ಲೋಕ ಹಾಂಕ ತೇಂ ಕಾಂಪೈ ।। ೨೩ ।।

ಅರ್ಥ : ನಿನ್ನ ತೇಜಸ್ಸನ್ನು ನೀನೇ ನಿಗ್ರಹಿಸಿಕೋ ನಿನ್ನ ಒಂದು ಗರ್ಜನೆಯಿಂದ ಮೂರು ಲೋಕಗಳು ನಡುಗುತ್ತವೆ

ಭೂತ ಪಿಶಾಚ ನಿಕಟ ನಹಿಂ ಆವೈ ।
ಮಹಾವೀರ ಜಬ ನಾಮ ಸುನಾವೈ ।। ೨೪ ।।

ಅರ್ಥ : ನಿನ್ನನ್ನು ಸ್ಮರಿಸಿದ ಮಾತ್ರದಿಂದ ಭೂತ ಪಿಶಾಚಿಗಳು ಹತ್ತಿರ ಸುಳಿಯುವುದಿಲ್ಲ

ನಾಸೈ ರೋಗ ಹರೈ ಸಬ ಪೀರಾ ।
ಜಪತ ನಿರಂತರ ಹನುಮತ ವೀರಾ ।। ೨೫ ।।

ಅರ್ಥ : ವೀರನಾದ ಹನುಮಂತನೇ ನಿನ್ನ ನಾಮವನ್ನು ನಿರಂತರ ಜಪಿಸುವುದರಿಂದ ಸಕಲ ರೋಗಗಳು ದೂರಾಗುತ್ತವೆ, ಎಲ್ಲ ಕಷ್ಟಗಳು ಕಳೆಯುತ್ತವೆ.

ಸಂಕಟಸೇ ಹನುಮಾನ ಛುಡಾವೈ ।
ಮನ ಕ್ರಮ ವಚನ ಧ್ಯಾನ ಜೋ ಲಾವೈ ।। ೨೬ ।।

ಅರ್ಥ : ಮನಸಾ ವಾಚಾ ಕರ್ಮಣಾ ಯಾರು ಹನುಮಂತನನ್ನು ಸ್ಮರಿಸುತ್ತಾರೋ ಅವರ ಸಂಕಷ್ಟಗಳನ್ನು ದೂರ ಮಾಡುತ್ತಾನೆ

ಸಬ ಪರ ರಾಮ ತಪಸ್ವೀ ರಾಜಾ ।
ತಿನ ಕೇ ಕಾಜ ಸಕಲ ತುಮ ಸಾಜಾ ।। ೨೭ ।।

ಅರ್ಥ : ಯಾರೇ ಆಗಲಿ ರಾಮನ ಭಕ್ತರಾದರೆ ಅವರ ಕಾರ್ಯಗಳನ್ನು ನೀನೇ ಸಾಂಗಗೊಳಿಸುತ್ತಿಯೇ

ಔರ ಮನೋರಥ ಜೋ ಕೋಯೀ ಲಾವೈ ।
ತಾಸು ಅಮಿತ ಜೀವನ ಫಲ ಪಾವೈ ।। ೨೮ ।। [** ಸೋಯಿ **]

ಅರ್ಥ : ಇನ್ಯಾವುದೇ ಮನೋರಥವನ್ನು ಹನುಮಂತನಲ್ಲಿ ಹೇಳಿಕೊಂಡರೆ ಅವರಿಗೆ ಜೀವನದ ಎಲ್ಲ ಫಲಗಳು ದೊರಕುತ್ತವೆ

ಚಾರೋಂ ಯುಗ ಪ್ರತಾಪ ತುಮ್ಹಾರಾ ।
ಹೈ ಪರಸಿದ್ಧ ಜಗತ ಉಜಿಯಾರಾ ।। ೨೯ ।।

ಅರ್ಥ : ನಿನ್ನ ಪ್ರತಾಪವು ಚತುರ್ಯುಗಗಳಲ್ಲಿ ಹರಡಿದೆ.‌ ನಿನ್ನ ಯಶೋ ಕೀರ್ತಿಯು ಜಗತ್ಪ್ರಸಿದ್ಧವಾದುದು

ಸಾಧುಸಂತಕೇ ತುಮ ರಖವಾರೇ ।
ಅಸುರ ನಿಕಂದನ ರಾಮ ದುಲಾರೇ ।। ೩೦ ।।

Hanuman Chalisa In Kannada Meaning

ಅರ್ಥ : ನೀನು ಸಾಧು ಸಂತರ ರಕ್ಷಕನು, ರಾಕ್ಷಸರನ್ನು ಸಂಹರಿಸಿದ ರಾಮ ಪ್ರಿಯನು

ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ ।
ಅಸವರ ದೀನ್ಹ ಜಾನಕೀ ಮಾತಾ ।। ೩೧ ।।

ಅರ್ಥ : ಜಾನಕಿಮಾತೆಯು ನೀನು ಅಷ್ಟ ಸಿದ್ಧಿಗಳನ್ನು ನವನಿಧಿಗಳನ್ನು ಕೊಡುವವನಾಗು ಎಂದು ವರವನ್ನು ನೀಡಿದಳು‌

ರಾಮ ರಸಾಯನ ತುಮ್ಹರೇ ಪಾಸಾ ।
ಸದಾ ರಹೋ ರಘುಪತಿ ಕೇ ದಾಸಾ ।। ೩೨ ।।

ಅರ್ಥ : ರಾಮಭಕ್ತಿ ಎಂಬ ರಸಾಯನ ನಿನ್ನ ಬಳಿಯಿದೆ. ನೀನು ಸದಾ ಕಾಲ ರಘುನಾಥನ ದಾಸನಾಗಿರು

ತುಮ್ಹರೇ ಭಜನ ರಾಮ ಕೋ ಪಾವೈ ।
ಜನ್ಮ ಜನ್ಮ ಕೇ ದುಖ ಬಿಸರಾವೈ ।। ೩೩ ।।

ಅರ್ಥ : ನಿನ್ನ ಸ್ಮರಣೆ ಮಾಡಿದರೆ ಶ್ರೀರಾಮನೇ ನಮಗೆ ಲಭ್ಯವಾಗುತ್ತಾನೆ. ಜನ್ಮ ಜನ್ಮಾಂತರಗಳ ದು:ಖವನ್ನು ಮರೆಸುತ್ತಾನೆ

ಅಂತಕಾಲ ರಘುಪತಿ ಪುರ ಜಾಯೀ । [** ರಘುವರ **]
ಜಹಾಂ ಜನ್ಮಿ ಹರಿಭಕ್ತ ಕಹಾಯೀ ।। ೩೪ ।।

ಅರ್ಥ : ಅಂತ್ಯಕಾಲ ಬಂದಾಗ ರಘುನಾಥನ ನಗರಿಯಲ್ಲಿ ಜನ್ಮಿಸಿ ಹರಿಭಕ್ತನೆಂಬ ಕೀರ್ತಿಯನ್ನು ಪಡೆಯುತ್ತಾನೆ

ಔರ ದೇವತಾ ಚಿತ್ತ ನ ಧರಯೀ ।
ಹನುಮತ ಸೇಯಿ ಸರ್ವಸುಖಕರಯೀ ।। ೩೫ ।।

ಅರ್ಥ : ಉಳಿದ್ಯಾವ ದೇವತೆಗಳನ್ನು ಮನಸ್ಸಿಗೆ ತಾರದೆ, ಹನುಮಂತನನ್ನು ಸೇವಿಸಿ ಸಕಲ ಸುಖಗಳನ್ನು ಪಡೆಯುತ್ತಾರೆ

ಸಂಕಟ ಹರೈ ಮಿಟೈ ಸಬ ಪೀರಾ ।
ಜೋ ಸುಮಿರೈ ಹನುಮತ ಬಲವೀರಾ ।। ೩೬ ।।

ಅರ್ಥ : ಮಹಾವೀರನಾದ ಹನುಮಂತನನ್ನು ಸ್ಮರಿಸುವುದರಿಂದ ಎಲ್ಲ ಸಂಕಷ್ಟಗಳು ನೋವುಗಳು ಪರಿಹಾರವಾಗುತ್ತವೆ

ಜೈ ಜೈ ಜೈ ಹನುಮಾನ ಗೋಸಾಯೀ ।
ಕೃಪಾ ಕರಹು ಗುರು ದೇವ ಕೀ ನಾಯೀ ।। ೩೭ ।।

ಅರ್ಥ : ಹನುಮಂತ ದೇವರೇ ನಿನಗೆ ಜಯವಾಗಲಿ. ಗುರುದೇವನಂತೆ ನಮ್ಮಲ್ಲಿ ಕೃಪೆಯಿಡು

ಯಹ ಶತವಾರ ಪಾಠ ಕರ ಜೋಯೀ ।
ಛೂಟಹಿ ಬಂದಿ ಮಹಾಸುಖ ಹೋಯೀ ।। ೩೮ ।।

ಅರ್ಥ : ಇದನ್ನು ಯಾರು ನೂರು ಬಾರಿ ಪಠಣ ಮಾಡುವರೋ ಅವರು ಭವ ಬಂಧನಗಳಿಂದ ಬಿಡುಗಡೆ ಹೊಂದಿ ಮಹಾ ಸುಖವನ್ನು ಪಡೆಯುವರು

ಜೋ ಯಹ ಪಢೈ ಹನುಮಾನ ಚಾಲೀಸಾ ।
ಹೋಯ ಸಿದ್ಧಿ ಸಾಖೀ ಗೌರೀಸಾ ।। ೩೯ ।।

ಅರ್ಥ : ಈ‌ ಸ್ತೋತ್ರ ಹನುಮಾನ ಚಾಲೀಸಾವನ್ನು ಯಾರು ಪಠಣ ಮಾಡುತ್ತಾರೋ ಅವರಿಗೆ ಸಕಲ ಸಿದ್ಧಿಗಳು ಲಭಿಸುತ್ತವೆ ಎಂಬುದಕ್ಕೆ ಶಂಕರನೇ ಸಾಕ್ಷಿ

ತುಲಸೀದಾಸ ಸದಾ ಹರಿ ಚೇರಾ ।
ಕೀಜೈ ನಾಥ ಹೃದಯ ಮಹ ಡೇರಾ ।। ೪೦ ।।

ಅರ್ಥ : ಈ ಹನುಮಾನ ಚಾಲೀಸಾವನ್ನು ರಚಿಸಿದ ಹರಿಯ ದಾಸರಾದ ತುಲಸಿದಾಸರು ಎಲೈ ಸ್ವಾಮಿಯೇ ಸದಾ ನನ್ನ ಹ್ರದಯದಲ್ಲಿ ನೆಲಸು ಎಂದು ಪ್ರಾರ್ಥಿಸುತ್ತಾರೆ

ಪವನತನಯ ಸಂಕಟ ಹರಣ
ಮಂಗಳ ಮೂರತಿ ರೂಪ ।।
ರಾಮ ಲಖನ ಸೀತಾ ಸಹಿತ
ಹೃದಯ ಬಸಹು ಸುರ ಭೂಪ ।।

ಅರ್ಥ : ವಾಯುಪುತ್ರನೇ ಸಂಕಟ ಮೋಚಕನೆ ಮಂಗಳಮಯ ರೂಪ ಹೊಂದಿದ ಮೂರ್ತಿಯೇ ರಾಮಲಕ್ಷಣ ಸಮೇತನಾಗಿ ‌ನನ್ನ ಹ್ರದಯದಲ್ಲಿ ನೆಲಸು

Hanuman Chalisa Kannada Meaning PDF
Hanuman Chalisa Kannada Meaning PDF

Explore More :

Leave a Comment

Your email address will not be published. Required fields are marked *

Scroll to Top